ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಸಿಟಿ ವಲಯದ ಸಾಮೂಹಿಕ ವರಲಕ್ಷ್ಮಿಪೂಜೆ

ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಸಿಟಿ ವಲಯದ ಸಾಮೂಹಿಕ ವರಲಕ್ಷ್ಮಿಪೂಜೆ

ದೇವಾಡಿಗ ಸಂಘ ಮುಂಬೈ ಇದರ ಪ್ರಾದೇಶಿಕ ಸಮನ್ವಯ ಸಮಿತಿ ಸಿಟಿ ವಲಯದ ಮಹಿಳಾ ವಿಭಾಗದವರಿಂದ ಸಾಮೂಹಿಕ ವರಲಕ್ಷ್ಮಿ ಮಹಾಪೂಜೆಯು ಸೆಪ್ಟೆಂಬರ್ 3 2021 ರಂದು ದೇವಾಡಿಗ ಸೆಂಟರ್ ದಾದರ್ ನಲ್ಲಿ ಜರಗಿತು ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ಲತಾ ವಿಶ್ವನಾಥ ಮೊಯ್ಲಿ ಮತ್ತು ಅವರ ಸಮಿತಿ ಸದಸ್ಯರು, ಎಲ್ಲಾ ಮಹಿಳಾ ಸದಸ್ಯರು ವರಮಹಾಲಕ್ಷ್ಮಿ ಪೂಜೆಗೆ ಉತ್ಸಾಹ ಮತ್ತು ಭಕ್ತಿಯಿಂದ ಭಾಗವಹಿಸಿದ್ದರು. ಕೆಲವು ಮಹಿಳಾ ಸದಸ್ಯರು ವರ ಮಹಾಲಕ್ಷ್ಮಿ ಅವರನ್ನು ಆಶೀರ್ವದಿಸಲು ಮತ್ತು ಸಮುದಾಯದ ಎಲ್ಲ ಸದಸ್ಯರು ಎದುರಿಸುತ್ತಿರುವ ಪ್ರಸ್ತುತ ಸಾಂಕ್ರಾಮಿಕ ಕೋವಿಡ್ -19 ನಿಂದ ಹೊರಬರಲು ಭಕ್ತಿಗೀತೆಗಳನ್ನು ಹಾಡಿದರು. ಪೂಜೆಯು ಸಾಯಂಕಾಲ 4 ಗಂಟೆಗೆ ಭಜನೆಯೊಂದಿಗೆ ಪ್ರಾರಂಭವಾಯಿತು.

ಈ ವರಲಕ್ಷ್ಮಿ ಮಹಾಪೂಜೆಗೆ ಸುಮಾರು 25 ಸುಮಂಗಲೆಯರು ಸೇರಿ 40ಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಿದರು. ಎಲ್ಲ ಸುಮಂಗಲೆಯರು ಶೃದ್ಧಾ ಭಕ್ತಿಯಿಂದ ಪೂಜೆಯಲ್ಲಿ ಭಾಗವಹಿಸಿದರಲ್ಲದೆ ಭಜನಾ ಕಾರ್ಯಕ್ರಮದಲ್ಲೂ ಪಾಲ್ಗೊಂಡರು. ತದನಂತರ ಆಗಮಿಸಿದ ಎಲ್ಲ ಸುಮಂಗಲೆಯರಿಗೆ ಸಾಂಪ್ರದಾಯಿಕವಾಗಿ ವಸ್ತ್ರ, ಬಳೆ, ಪ್ರಸಾದವನ್ನು ವಿತರಿಸಲಾಯಿತು. ದಂಪತಿಯಾದ ಸುರೇಖಾ ಏಚ್ ದೇವಾಡಿಗ ಮತ್ತು ಹೇಮನಾಥ್ ದೇವಾಡಿಗರಿಂದ ಪೂಜೆ ನೆರವೇರಿತು. ಶ್ರೀಮತಿ ಗೀತ ಎಲ್ ದೇವಾಡಿಗರ ಮದುವೆಯ ವಾರ್ಷಿಕೋತ್ಸವದ ದಿನಾಚರಣೆಯನ್ನು ಆಚರಿಸಲಾಯಿತು.

ದೇವಾಡಿಗ ಸಂಘದ ಮಾಜಿ ಅಧ್ಯಕ್ಷರಾದ ಹಿರಿಯಡ್ಕ ಮೋಹನದಾಸ್, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಜೆ ಮೊಯಿಲಿ, ಜೊತೆ ಖಛಾಂಜಿ ಸುರೇಖಾ ದೇವಾಡಿಗ, ಸಂಘದ ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ರಂಜಿನಿ ಮೊಯಿಲಿ, ಸಿಟಿ ವಲಯದ ಕಾರ್ಯಾದ್ಯಕ್ಷ ಬಾಲಚಂದ್ರ ದೇವಾಡಿಗ ಮಾಜಿ ಅಧ್ಯಕ್ಷ ಶ್ರೀ ಹೇಮನಾಥ್ ದೇವಾಡಿಗ, ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ಲತಾ ವಿ ಮೊಯಿಲಿ ಉಪಕಾರ್ಯಾದ್ಯಕ್ಷೆ ಶ್ರೀಮತಿ ಸುಜಯ ವಿ ದೇವಾಡಿಗ, ಮಾಜಿ ಮಹಿಳಾ ಕಾರ್ಯಾದ್ಯಕ್ಷೆ ಗೀತ ಎಲ್ ದೇವಾಡಿಗ , ಮತ್ತು ಸಿಟಿ ವಲಯದ ಕಾರ್ಯದರ್ಶಿ ಶ್ರೀ ಶಿವ್ ಸಾಗರ್ ದೇವಾಡಿಗ, ಶ್ರೀ ನಿತೇಶ್ ದೇವಾಡಿಗ, ಮಾಜಿ ಮಹಿಳಾ ಕಾರ್ಯಾದ್ಯಕ್ಷೆ ಶ್ರೀಮತಿ ಜಯಂತಿ ಮೊಯಿಲಿ, ಶ್ರೀಮತಿ ಪ್ರತಿಮಾ ಜಿ ಮೊಯಿಲಿ, ಶ್ರೀಮತಿ ಸುಶೀಲಾ ದೇವಾಡಿಗ, ಆಕಾಶವಾಣಿ ಮುಂಬೈ, ಶ್ರೀ ರಮೇಶ್ ಮೊಯಿಲಿ, ಶ್ರೀಮತಿ ಸುಜಾತಾ ದೇವಾಡಿಗ, ಶ್ರೀಮತಿ ಹೇಮಲತಾ ದೇವಾಡಿಗ, ಶ್ರೀಮತಿ ಸರಸ್ವತಿ ಕಾರ್ಕಲ್, ಮ್ಯಾನೇಜರ್ ಶ್ರೀ ಶಂಭು ದೇವಾಡಿಗ ಮತ್ತು ಅನೇಕ ಸದ್ಯಸ್ಸರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ, ಶ್ರೀ ಕೃಷ್ಣ ದೇವಾಡಿಗ ಮತ್ತು ಶ್ರೀಮತಿ ಮಲ್ಲಿಕಾ ದೇವಾಡಿಗರ ಮಗಳು ಕುಮಾರಿ ಚೈತ್ರಾ ದೇವಾಡಿಗ ಎಚ್‌ಎಸ್‌ಸಿ ಪರೀಕ್ಷೆಯಲ್ಲಿ 96.16%ಗಳಿಸುವ ಮೂಲಕ ಅವರ ಅತ್ಯುತ್ತಮ ಸಾಧನೆಗಾಗಿ ಶಾಲು ಮತ್ತು ಹೂಗುಚ್ಛವನ್ನು ನೀಡಿ ಗೌರವಿಸಲಾಯಿತು. ಶ್ರೀ ಈಶ್ವರ್ ಮತ್ತು ರವಿಜಾ ದೇವಾಡಿಗರ ಪುತ್ರ ಮಾಸ್ಟರ್ ಪನ್ಸುಲ್ ದೇವಾಡಿಗ , ಕರಾಟೆಯಲ್ಲಿ ಚಿನ್ನದ ಪದಕ ವಿಜೇತ ಮತ್ತು ಟೇಕ್ವಾಂಡೋದಲ್ಲಿ ಅಂತಾರಾಷ್ಟ್ರೀಯ ಆಟಗಾರನನ್ನು ಶಾಲು ಮತ್ತು ಹೂಗುಚ್ಛವನ್ನು ನೀಡಿ ಗೌರವಿಸಲಾಯಿತು. ಶ್ರೀ ವಿಶ್ವನಾಥ್ ದೇವಾಡಿಗ ಮತ್ತು ಶ್ರೀಮತಿ ಸುಜಯ ವಿ ದೇವಾಡಿಗರ ಪುತ್ರಿ ಕುಮಾರಿ ಪೂರ್ವಿ ವಿ ದೇವಾಡಿಗ ಐಸಿಎಸ್‌ಇ ಪರೀಕ್ಷೆಯಲ್ಲಿ ಶೇಕಡಾ 89.00 ಅಂಕಗಳನ್ನು ಗಳಿಸಿದ ಅವರನ್ನು ಶಾಲು ಹೊದಿಸಿ, ಪುಷ್ಪ ನೀಡಿ ಗೌರವಿಸಲಾಯಿತು. ಶ್ರೀಮತಿ ಸುರೇಖಾ ದೇವಾಡಿಗರನ್ನು M.PHIL ಪದವಿ ಪಡೆದಿದ್ದಕ್ಕಾಗಿ ಸನ್ಮಾನಿಸಲಾಯಿತು.

ಪೂಜೆಯ ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆಯನ್ನು ಶ್ರೀಮತಿ ಲತಾ ವಿಶ್ವನಾಥ ಮೊಯ್ಲಿ ಮತ್ತು ಶ್ರೀಮತಿ. ಪ್ರತಿಮಾ ಗುಣಪಾಲ್ ಮೊಯ್ಲಿ ಮಾಡಿದರು.
ಕಾರ್ಯದರ್ಶಿ ಮಮತಾ ದೇವಾಡಿಗರ ಧನ್ಯವಾದಗಳೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.